ಮೈಸೂರು: ಕರ್ನಾಟಕದ ಮೊದಲ ಹಂತದ ಚುನಾವಣೆ ನಡೆಯುವ ದಿನ೧೮ ಅಂದರೆ '1 + 8 = 9', ಇದು ನನ್ನ ಅದೃಷ್ಟದ ಸಂಖ್ಯೆ ಹೀಗಾಗಿ ಈ ಚುನಾವಣೆಯಲ್ಲಿ ಗೆಲುವು ನಮ್ಮದೆ ಎಂದು ಪಿಡಬ್ಲ್ಯೂಡಿ ಮಂತ್ರಿ ಎಚ್.ಡಿ. ರೇವಣ್ಣ ಗುರುವಾರ ಭವಿಷ್ಯ ನುಡಿದಿದ್ದಾರೆ.ಜ್ಯೋತಿಷ್ಯ ಮತ್ತು ವಾಸ್ತುವಿನ ಆಳವಾದ ನಂಬಿಕೆಗೆ ಹೆಸರುವಾಸಿಯಾದ ರೇವಣ್ಣ ಸಂಖ್ಯಾಶಾಸ್ತ್ರಜ್ಞರಾಗಿ ಪರಿವರ್ತಿತರಾಗಿದ್ದಾರೆ! ರ್ನಾಟಕದ ಪ್ರಥಮ ಹಂತದ ಲೋಕಸಭಾ ಚುನಾವಣೆಯ ದಿನಾಂಕವು ಆಡಳಿತ ಪಕ್ಷಗಳಿಗೆ 'ಅದೃಷ್ಟ' ತರಲಿದೆ ಎಂದು ಅವರು ಹೇಳಿದ್ದಾರೆ.